Description
ಇದು ವಾಲ್ಮೀಕಿ ರಾಮಾಯಣದ ಪುನಃಕಥನ. ಮೂಲವನ್ನು ಮೀರದ ಬರಹ, ಹಾಗೆಂದು ಶಬ್ದಾನುವಾದವಲ್ಲ. ವಾಲ್ಮೀಕಿಗಳ ಭಾವವನ್ನು ಹಿಡಿದು ಅದನ್ನು ಹೊರಹೊಮ್ಮಿಸುತ್ತಾ ಸಾಗುವ ಅನುಪಮ ಕಥಾ ಕಥನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿಷಯಗಳ ಹಿನ್ನೆಲೆ-ಮುನ್ನೆಲೆಗಳನ್ನು ಸಂಯೋಜಿಸುತ್ತಾ, ಮೂಲದಲ್ಲಿ ಹಂಚಿದಂತಿರುವ ಅಂಶಗಳನ್ನು ಒಂದೆಡೆ ಜೋಡಿಸುತ್ತಾ, ತ್ರೇತಾಯುಗದ ಮಹಾಪುರುಷರ ದಿವ್ಯವ್ಯಕ್ತಿತ್ವವನ್ನು ಮತ್ತೆ ಕಟ್ಟಿಕೊಡುತ್ತಿದ್ದಾರೆ. ರಾಮಾಯಣ ಮಹಾಸತ್ರ, ರಾಮಕಥಾ, ಧಾರಾ ರಾಮಾಯಣ ಮೊದಲಾದ ಅನೇಕ ಕಾರ್ಯಗಳ ಮೂಲಕ ನಿರಂತರವಾಗಿ ರಾಮಾಯಣವನ್ನು – ರಾಮಚರಿತೆಯನ್ನು ಬಿತ್ತರಿಸುತ್ತಾ ಬಂದ ಶ್ರೀಶ್ರೀಗಳವರ ಮತ್ತೊಂದು ವಿಶಿಷ್ಟ ಉಪಕ್ರಮ ಇದು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶ ಬದುಕಿನ ಅದ್ಭುತ ಪಯಣ; ವಾಲ್ಮೀಕಿ ಮಹರ್ಷಿಗಳ ಅನುಪಮ ಕಥಾಲಹರಿಯ ಪುನರನುಸಂಧಾನ; ಶ್ರೀರಾಮನ ಅವತಾರದವರೆಗಿನ ಸನ್ನಿವೇಶಗಳ ಅಪರೂಪದ ಚಿತ್ರಣ.
Reviews
There are no reviews yet.