Description
ಎಲ್ಲ ವಿದ್ಯೆ ಸುಲಭದ್ದಲ್ಲಿ, ಸಕತೆ ತಪಸ್ಸಿನ ಸಾಧನೆಯಿಂದ ಈ ಸಿದ್ದಿ ಮಾಡಿಕೊಂಡು ನಮಗೆ ಸನ್ಮಾರ್ಗ ತೋರಿದವರು ಋಷಿಮುನಿಗಳು.
ಅಂಥ ಸಾಧಕ ಮಹಾಪುರುಷರಲ್ಲಿ ‘ಕಣ್ಣ’ ಮಹರ್ಷಿಗಳೂ ಒಬ್ಬರು. ಲೌಕಿಕ, ಅಲೌಕಿಕ ಬದುಕಿನ ಜ್ಞಾನ ಹಂಚುತ್ತಲೇ ಶಿಸ್ತಿನಲ್ಲಿ ಶಿಷ್ಯರನ್ನು ಬೆಳಸಿ ಅವರಲ್ಲಿ ಕರುಣೆಯನ್ನೂ ತುಂಬಿದ ಋಷಿ ರತ್ನರು. ಕಾಳಿದಾಸ ತನ್ನ ಅಭಿಜ್ಞಾನಶಾಕುಂತಲದಲ್ಲಿ ಕಣ್ಣರ ಮಾತೃ ಹೃದಯವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾನೆ.
ಇಂಥವರ ಕುರಿತು ಬಹುಶ್ರುತ ವಿದ್ವಾಂಸ ಡಾ.ಕೆ.ಎಸ್.ಕಣ್ಣನ್ ಅಪರೂಪದ ಕೃತಿ ನೀಡಿದ್ದಾರೆ. ಶ್ರೀಭಾರತೀ ಪ್ರಕಾಶನವು ಈ ನೆಲದ ಭಾಷೆಯಲ್ಲಿ ಈ ಕೃತಿಯನ್ನು ಒದಗಿಸುವ ಮೂಲಕ ಶತ ಶತಮಾನಕ್ಕೆ ಅನನ್ಯ ಕೊಡುಗೆ ನೀಡಿದೆ.
ಇಂಥ ಕೃತಿಗಳ ಮುದ್ರಣ, ಪುನರ್ಮುದ್ರಣಗಳು ನಮ್ಮ ಇಂದಿನ ಹಾಗೂ ಮುಂದಿನ ತಲೆಮಾರಿಗೆ ನಾವು ಕೊಡಬಹುದಾದ ಕಳಕಳಿಯ ಬಳುವಳಿ.






Reviews
There are no reviews yet.