Description
ಭಾರತವರ್ಷ ವೈದಿಕೇತರ ಮತಗಳಿಂದಾಗಿ ನಲುಗಿ ಬೆಂಡಾದ, ಅಲಸ್ಯ, ಜಡತೆ, ಮೌಲ್ಯಗಳೇ ತುಂಬಿದ್ದ ಬಾಹ್ಯಾಚಾರಗಳು ಮತ್ತು ವಿವೇಕರಹಿತ ಜೀವನಕ್ರಮ ಸಾಮಾನ್ಯರಲ್ಲಿ ಅವರಿಸಿದ್ದ ಸನಾತನ ಧರ್ಮ ದಿಕ್ಕುದೆಸೆಯಿಲ್ಲದಂತೆ ಆದ ಕಾಲಘಟ್ಟದಲ್ಲಿ ಅವಿರ್ಭವಿಸಿ ಬಂದವರು ಶ್ರೀಶಂಕರಾಚಾರ್ಯರು.
ಘನ ವಿದ್ವತ್ತು, ಪ್ರಚಂಡವಾದ ಸಂಕಲ್ಪಶಕ್ತಿ, ಮೇಧಾಶಕ್ತಿ, ಧರ್ಮದ ಬಗೆಗಿನ ಆಳವಾದ ದಿವ್ಯವಾದ ಪ್ರೀತಿ, ಶ್ರದ್ಧೆ, ವಾಕ್ಸಟುತ್ವ, ಎಲ್ಲಕ್ಕಿಂತ ಮಿಗಿಲಾಗಿ ಹೃದಯವಂತಿಕೆ, ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಸುರದ್ರೂಪಗಳ ಅಸಾಮಾನ್ಯ ವ್ಯಕ್ತಿತ್ವ ಆಚಾರ್ಯರದ್ದು.
ಪ್ರಕೃತ ಇಲ್ಲಿ ವಿದ್ವಾಂಸರೂ ಜನಪ್ರಿಯ ಲೇಖಕರೂ ಆದ ಜಗದೀಶಶರ್ಮರು ಆಚಾರ್ಯರ ಆ ದಿವ್ಯ-ಭವ್ಯ ಚರಿತ್ರೆಗೆ ಅಕ್ಷರರೂಪ ನೀಡಿದ್ದಾರೆ. ಇದು ಹೃದಯಂಗಮವೂ, ಚೇತೋಹರವೂ, ವಿಚಾರಪ್ರಚೋದಕವೂ ಆಗಿದೆ.






Reviews
There are no reviews yet.