Description
ಭಕ್ತಿಯೋಗಮಾರ್ಗದ ಪ್ರವರ್ತಕ ದೇವರ್ಷಿ ನಾರದರು ಭೂತ-ವರ್ತಮಾನ-ಭವಿಷ್ಯತ್ತುಗಳನ್ನು ಬಲ್ಲ ತ್ರಿಲೋಕ ಜ್ಞಾನಿ, ಸದಾ ಸಂಚಾರಿ, ಸಂಗೀತಗಾರ, ಆಪ್ತ ಸಲಹೆಗಾರ, ಕಥನಕಾರ, ಬ್ರಹ್ಮಾಂಡ ಕಂಡ ಮೊದಲ ಸುದ್ದಿವಾಹಕ. ಸುದ್ದಿಗಾರನಲ್ಲಿರಬೇಕಾದ ಕಥನ ಕುತೂಹಲ, ಕಲಿಕೆಯ ಕಾತರ ಹಾಗೂ ಕೀಟಲೆಗಳಿಗೆ ಮೊದಲ ಮಾದರಿ ಅವರೇ ಸಂದೇಶ ವಾಹನೆಯ ಗಡಿಬಿಡಿಯಿಂದಾಗಿ ಕಲಹ ಕಥನಗಳ ಮೋಜೂ ಇವರಿಂದ ದಕ್ಕಿತು. ಅವೆಲ್ಲವೂ ಕಲ್ಯಾಣಕಾರಕವೇ ಆದರೂ ಕಲಹಪ್ರಿಯ ಎಂಬ ಅಪವಾದವೂ ತಪ್ಪಲಿಲ್ಲ. ನಾರದರು ಬರೀ ಪುರಾಣದ ಪುಟದಲ್ಲಿಲ್ಲ. ನಮ್ಮ ನಿಮ್ಮೊಳಗಿದ್ದಾರೆ – ಗುಣವಾಗಿ, ನಿರ್ಗುಣವಾಗಿ, ರೂಪಕವಾಗಿ.
ನಾರದರ ಬದುಕನ್ನು ನೆನಪಿಸುತ್ತಿರುವ ವಿದ್ವಾನ್ ಸತ್ಯನಾರಾಯಣ ಶರ್ಮಾ ಅವರಿಗೆ ಪ್ರಣಾಮಗಳು.






Reviews
There are no reviews yet.