Description
ಕ್ಷಾತ್ರಬಲಕ್ಕಿಂತ ಬ್ರಾಹ್ಮತೇಜಸ್ಸೇ ಬಲಶಾಲಿಯೆಂದು ಕಂಡುಕೊಂಡವರು. ಸಾವಿರಾರು ವರ್ಷಗಳ ಕಾಲದ ತಪಸ್ಸಿನಿಂದ ಗಳಿಸಿದ ಶಕ್ತಿಯನ್ನೆಲ್ಲ ಶರಣಾಗತರಿಗಾಗಿ ವ್ಯಯಮಾಡಿದವರು.
ತ್ರಿಶಂಕುವಿಗಾಗಿ ಹೊಸ ಸ್ವರ್ಗವನ್ನೇ ಸೃಷ್ಟಿಸಿದ್ದವರು. ಮೊದಲು ರಾಜನೆಂಬ ಮದದಲ್ಲಿ ಮೆರೆದು, ಕ್ರೋಧ-ಲೋಭ-ಮೋಹಗಳಲ್ಲಿ ತೊಳಲಿ, ಕಾಮನೆಯಿಂದ ಬಳಲಿ, ಮತ್ಸರದಲ್ಲಿ ಹೊರಳಿ, ಇವೆಲ್ಲವನ್ನೂ ಮೀರಿ ನಿಲ್ಲುವುದೇ ಬ್ರಾಹ್ಮಣ್ಯವೆಂದು ಕಂಡುಕೊಂಡು ಬ್ರಹ್ಮರ್ಷಿಗಳಾದವರು. ಎಲ್ಲರ ಉದ್ಧಾರಕ್ಕಾಗಿ ಗಾಯತ್ರಿಯೆಂಬ ಮಂತ್ರದ ದ್ರಷ್ಟಾರರಾದ ‘ಮಹಾಬ್ರಾಹ್ಮಣ’ರು ವಿಶ್ವಾಮಿತ್ರರು. ಅವರನ್ನು ಪರಿಚಯಿಸುವ ಶ್ರೀ ಮಹೇಶ ಎಳ್ಳಡ್ಕ ಅವರು ಬರೆದ ಈ ಪುಸ್ತಿಕೆ ಸಂಕ್ಷಿಪ್ತವಾದರೂ ಪರಿಪೂರ್ಣವಾಗಿದೆ.






Reviews
There are no reviews yet.