Description
ಭಾರತದ ಸಾಂಸ್ಕೃತಿಕ ಲೋಕದಲ್ಲಿ ಗುರುವಿನ ಸ್ಥಾನ ಅತ್ಯಂತ ಮಹತ್ವ ಪೂರ್ಣ ನಮ್ಮ ಗುರುಪರಂಪರೆಯ ಮಹತ್ತ್ವವನ್ನು ತಪಸ್ವಿಗಳು ಸಾಧಕರು ಮಾತ್ರವಲ್ಲ, ಸನಾತನಧರ್ಮದ ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕು. ಇಂತಹ ಅಪೂರ್ವವೂ ಅನುಪಮವೂ ಅದ ಗುರುಪರಂಪರೆಯ ಪ್ರಾತಿನಿಧಿಕ ಸ್ವರೂಪರಾಗಿ ಶ್ರೀವ್ಯಾಸಮಹರ್ಷಿಗಳು ನಮ್ಮಲ್ಲಿ ಪರಿಗಣಿತರಾಗಿದ್ದಾರೆ.
ಚತುರ್ವೇದಗಳನ್ನು ವ್ಯವಸ್ಥೆಗೊಳಿಸಿ, ಇತಿಹಾಸವಾದ ಮಹಾಭಾರತವನ್ನು ಮತ್ತು ಮಹಾಪುರಾಣಗಳನ್ನು ಲೋಕಕ್ಕೆ ಅನುಗ್ರಹಿಸಿದ ಪುಣ್ಯ ಪುರುಷರು ವ್ಯಾಸರು.
ಶ್ರೀವ್ಯಾಸಮಹರ್ಷಿಗಳನ್ನು ಕುರಿತು ಬಹುಶ್ರುತ ವಿದ್ವಾಂಸರಾದ ರಾಮಚಂದ್ರಶರ್ಮಾ ತ್ಯಾಗಲಿಯವರ ಈ ಕೃತಿ, ಅಂಗೈಯಗಲದ ಕನ್ನಡಿಯಲ್ಲಿ ಆನೆಯನ್ನು ತೋರಿದಂತೆ ಇದೆ. ವ್ಯಾಸರು ಅಧ್ಯಯನದ ಸಂಕೇತ. ಅವರ ವ್ಯಕ್ತಿತ್ವದ ಮಹತ್ತ್ವ ತಿಳಿಯಲು ಸತತಾಧ್ಯಯನ-ಚಿಂತನಗಳೇ ದಾರಿ.






Reviews
There are no reviews yet.