Description
ಪುರಾಣೇತಿಹಾಸ ಕಾಲದಿಂದ ವರ್ತಮಾನದವರೆಗಿನ ಸಂತಶ್ರೇಷ್ಠರ, ಮಹಾಪುರುಷರ ಮಹಾಚೇತನಗಳ ಬದುಕಿನ ಚಿತ್ರಣವನ್ನು, ಬೋಧನೆಯ ತತ್ತ್ವವನ್ನು, ಜೀವನ ಸಂದೇಶವನ್ನು ಬಿತ್ತರಿಸುವ ಅರವತ್ತು ಕಿರು ಹೊತ್ತಗೆ ಗುಚ್ಚವೇ ಗುರುಗ್ರಂಥಮಾಲಿಕೆ.
ಆಚಾರ್ಯಶಂಕರರ ಪ್ರತಿನಿಧಿಯಾಗಿ ಜಗತ್ತಿಗೆ ಧರ್ಮಧಾರೆಯನ್ನು ಪಸರಿಸುತ್ತಾ ಅತವೇದಾಂತ ಸಂಪ್ರದಾಯದ ಭದ್ರ ಬುನಾದಿಯನ್ನು ಹಾಕಿಕೊಟ್ಟ ಶ್ರೀಸುರೇಶ್ವರಾಚಾರ್ಯರ ಬಗೆಗಿನ ಈ ಕೃತಿ ಗುರುಗ್ರಂಥಮಾಲಿಕೆಯ ಸರಣಿಯ ಅರವತ್ತು ಪುಸ್ತಕಗಳಲ್ಲೊಂದು.
ಸನಾತನಧರ್ಮದ ವಿಶಿಷ್ಟತೆಯನ್ನು, ಶ್ರೇಷ್ಠತೆಯನ್ನು, ಶ್ರೀಮಂತಿಕೆಯನ್ನು ಸಾರಿ ಹೇಳಿದ; ಶ್ರೀವಿದ್ಯಾನಂದರಂತಹ ಶ್ರೇಷ್ಠಸಂತರಿಗೆ ಸಂನ್ಯಾಸ ದೀಕ್ಷೆಯನ್ನು ಅನುಗ್ರಹಿಸಿದ; ನಾಡಿನ ಶ್ರೇಷ್ಠ ಧರ್ಮಾಚಾರ್ಯರಲ್ಲೊಬ್ಬರಾದ ಶ್ರೀಸುರೇಶ್ವರಾಚಾರ್ಯರ ಬದುಕಿನ ಕೆಲಕಾಲಘಟ್ಟವನ್ನು ಪರಿಮಿತಿಯ ಅವಕಾಶದಲ್ಲಿ ಪರಿಪೂರ್ಣವಾಗಿ ಪ್ರಚುರಪಡಿಸಲು ಪ್ರಯತ್ನಿಸಿದ ಕೃತಿಕಾರರ ಕಾರ್ಯ ಅಭಿನಂದನಾರ್ಹ






Reviews
There are no reviews yet.