Description
ಶಂಕರಾಚಾರ್ಯರ ನೇರ ಶಿಷ್ಯರಲ್ಲೊಬ್ಬರಾದ ತೋಟಕಾಚಾರ್ಯರ ಬಗ್ಗೆ ಲಭ್ಯವಿರುವ ಕೆಲವೇ ಮಾಹಿತಿಗಳನ್ನಾಧರಿಸಿ ಅವರ ಬದುಕು, ಬರಹಗಳ ಬಗ್ಗೆ ವಿದ್ವಾನ್ ನರಸಿಂಹ ಬಡಗು ಅವರು ಈ ಪುಸ್ತಕದಲ್ಲಿ ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ.
ಅವರ ತೋಟಕಾಷ್ಟಕ ಅದೈತ ದರ್ಶನವನ್ನು ಮಾಡಿಸುವ ಕೃತಿಯೆಂದು ಶ್ಲೋಕಗಳ ವಿವರಣೆಯೊಂದಿಗೆ ಗುರುತಿಸಿದ್ದಾರೆ. ತೋಟಕಾಚಾರ್ಯರ ಇನ್ನೊಂದು ಕೃತಿ ‘ಶ್ರುತಿಸಾರಸಮುದ್ಧರಣ’. ವೇದಾಂತ ವಿಷಯವನ್ನು ಕಾವ್ಯಮಯವಾಗಿ ಹೇಳಿದ ಕೃತಿ. ಈ ಗ್ರಂಥವನ್ನು ಓದಲು ಇನ್ನಿತರ ಯಾವ ಶಾಸ್ತ್ರದ ಪರಿಣಿತಿ ಬೇಕಿಲ್ಲ, ಸಂಸ್ಕೃತ ಭಾಷೆಯ ಆಳವಾದ ಜ್ಞಾನ ಬೇಕಿಲ್ಲ. ಕೇವಲ ವೇದಾಂತದ ಅಭಿರುಚಿಯಿದ್ದರೆ ಸಾಕು ಎನ್ನುವುದನ್ನು ತಮ್ಮ ವಿದ್ವತ್ತೂರ್ಣ ಬರಹದಿಂದ ವಿಶದಪಡಿಸಿದ್ದಾರೆ.






Reviews
There are no reviews yet.